Friday 26 February 2016

                                           ಯಾವ ಮೋಹನ ಮುರಳಿ ಕರೆಯಿತು….

         ತಾನು ತನ್ನತನ ಎಂಬ ಆಳ ಸಾಗರದೊಳಗೆ ಹೊಕ್ಕಿಯಾಗಿದೆ.., ದೂರ ತೀರದಲ್ಲಿ ಮುರಳಿಯ ನಾದ  ಹಿತವೆನಿಸಿದರೂ 'ತನ್ನ' ಮಹಾಸಾಗರವನ್ನು ಬಿಟ್ಟು ಹೊರಬರಲಾಗುತ್ತಿಲ್ಲ ,. ಹೊರಬರಲಾಗುತ್ತಿಲ್ಲ ಎನ್ನುವುದಕ್ಕಿಂತ ಪ್ರಯತ್ನಿಸುತ್ತಿಲ್ಲ....!

                        ......ತನ್ನ ಮಹಾಸಾಗರ... ಅದರಲ್ಲಿ ತಾನು,ತನ್ನವರು, ಜೊತೆಗೆ ತನ್ನದೇ ಆದ ಗುರಿಗಳು,ಬಯಕೆಗಳು,ಬೆಟ್ಟದಷ್ಟು,ಕನಸುಗಳು ಅದೆಷ್ಟರ ಮಟ್ಟಿಗೆ ಈಡೇರುತ್ತದೋ,ನಿರೀಕ್ಷೆಗಳು ಎಷ್ಟರ ಮಟ್ಟಿಗೆ ನೆರವೇರುವುದೋ ಯಾರೂ ಊಹಿಸಲಾರರು.... ಬರಿಯ ಮೂಳೆ-ಮಾಂಸದ ದೇಹದೊಳಗೆ ಉಸಿರಾಟದಿಂದಷ್ಟೇ ಅಸ್ತಿತ್ವವಿದೆ.... ನಾನು-ನನ್ನದು ಎಂಬ ಆತನ ಅಸ್ತಿತ್ವ ಇರುವುದು ಆತನ ಪ್ರಾಣದಲ್ಲಿಯಷ್ಟೇ.,ಆತನ ಅಸ್ಥಿತ್ವದ ಕುರುಹಾಗಿರುವ ಆತನ ಉಸಿರೇ ಇಲ್ಲವಾದಾಗ ಅವನ ಕನಸುಗಳೆಲ್ಲಿ,ನಿರೀಕ್ಷೆಗಳೆಲ್ಲಿ,ತಾನು ತನ್ನದೂ ಎಂಬ ಒಣಪ್ರತಿಷ್ಟೆಗಳೆಲ್ಲಿ ಉಳಿದಾವು? ?

                 ಜೀವನದಲ್ಲಿ ಮನುಷ್ಯ ಸುಖಕ್ಕಾಗಿಯಷ್ಟೇ ಪರಿತಪಿಸುತ್ತಾನೆ., ತನ್ನ ಹಿತಕ್ಕಾಗಿ ಏನನ್ನಾದರೂ ಮಾಡಬಲ್ಲ., ನಾಲ್ಕು ದಿನದ ಬದುಕಿಗೆ ಏನಾದರೂ ಮಾಡಬಲ್ಲ., ತನ್ನ ಬದುಕನ್ನು ಕೇವಲ ತನ್ನ ಕನಸುಗಳ,ಬಯಕೆಗಳ ತೃಪ್ತಿಗಾಗಿಯಷ್ಟೇ ಸೀಮಿತಗೊಳಿಸುತ್ತಾನೆ....ತನ್ನ ನಶಿಸುವ ದೇಹಕ್ಕಾಗಿ ದುಡಿದು ಹಣ್ಣಾಗಿರುತ್ತಾನೆ, ಅದೆಷ್ಟರ ಮಟ್ಟಿಗೆ ಎಂದರೇ ತನ್ನ ಜಗತ್ತಿನಿಂದ ಹೊರಬರಲೂ ಸಾಧ್ಯವಾಗದ ಸ್ಥಿತಿಗೆ ಬಂದಿರುತ್ತಾನೆ ತನ್ನ ಭವ ಸಾಗರದ ಆಳದಲ್ಲಿ ಹೊಕ್ಕವನಿಗೆ ಇನ್ನೊಂದು ಸುಪ್ತ ಅಲೌಕಿಕ ಲೋಕದ ಸೌಂದರ್ಯದ ಸ್ವಾದವನ್ನು ಆಘ್ರಾಣಿಸುವ ವ್ಯವದಾನ ಅಥವಾ ಸಮಯವಂತೂ ಇರುವುದಿಲ್ಲ.... ತನ್ನ ಬಯಕೆಗಳಿಗೆ,ತನ್ನ ಕನಸುಗಳಿಗಷ್ಟೇ ತನ್ನ ಪ್ರಂಪಂಚದಲ್ಲಿ ಬೇಲಿ ಹಾಕಿಕೊಂಡು ಬದುಕುವ ಬರಾಟೆಯಲ್ಲಿರುತ್ತಾನೆ.... ಅದಕ್ಕೆ ಕೊನೆ ಎಂದೋ ಶುರುವೆಂದೋ.....

                 ತನಗಾಗಿ, ತನ್ನ ಸ್ವಾರ್ಥಕ್ಕಾಗಿ ಹಾಕಿಕೊಂಡ ಬೇಲಿ ಒಂದು ದಿನ ತಾನಾಗೇ ಕಳಚಿ ಬೀಳುತ್ತದೆ ಎಂಬುದು ಅರಿವಿದ್ದರೂ ಬಿಡದ ನಿರೀಕ್ಷೆ...! ತನ್ನದಲ್ಲದರ ಬಗ್ಗೆ ಅತಿಯಾದ ವ್ಯಾಮೋಹ.,ಬಿಡದ ಹುಚ್ಚು, ಸುಪ್ತಪ್ರಜ್ಞೆಯಲ್ಲಿ ತನ್ನನ್ನು ಯಾವಾಗಲೂ ಕೈ ಬೀಸಿ ಕರೆಯುತ್ತಾ   ಜಾಗೃತಗೊಳಿಸುವ ಆಧ್ಯಾತ್ಮಿಕ ಶಕ್ತಿಯ  ಶಾಶ್ವತ ಸುಖದತ್ತ ಹೊರಳಲು ಮನಸ್ಸು ಹಿಂಜರೆಯುತ್ತದೆ.. ಜೀವನದ ಸಣ್ಣ ಪುಟ್ಟ ಕನಸುಗಳ ಅಥವಾ ಗುರಿಯ ಈಡೇರಿಕೆಯನ್ನೇ ಮಹಾನ್ ಸಾಧನೆಯೆಂಬಂತೆ ಬೀಗುತ್ತಾನೆ.. ಆದರೆ ಇದಕ್ಕೂ ಮಿಗಿಲಾದ ಆಧ್ಯಾತ್ಮಿಕ ಸುಖ ತೀರದಾಚೆ ಕೈ ಬೀಸಿ ಕರೆಯುತ್ತಿದೆ.,ಮನುಷ್ಯನ ನಿಜವಾದ ಸುಖವಿರುವುದು ಆಧ್ಯಾತ್ಮಿಕ ಸಾಧನೆಯಲ್ಲಿ....! ಇರುವುದೆಲ್ಲವನ್ನೂ ಬದಿಗೊತ್ತಿ ಇರದಿರುವ ಅಥವಾ ಶಾಶ್ವತ ವಲ್ಲದ ಬೌತಿಕ ಜಗತ್ತಿನ ಸಂಬಂಧಗಳಿಗಾಗಿ,ಬೌತಿಕ ವಸ್ತುಗಳಿಗಾಗಿ ಕೊನೆಗೆ ನಮ್ಮ ಬೌತಿಕ ದೇಹದ ಸುಖಕ್ಕಾಗಿ ದಿನಬೆಳಗಾದರೇ ಹೆಣಗುತ್ತಲೇ ಇರುತ್ತಾನೆ.,ನಾನು ನನ್ನದೆಂಬ ಬಂಧನದಾಚೆಗಿನ ಸುಪ್ತ ಸಮುದ್ರವನ್ನು ಸೇರಬೇಕೆನ್ನುವ ಆಸೆ ಅಥವಾ ಬಯಕೆ ಅದು ಅಂತಿಮ ಘಟ್ಟ.,..

                 ಅಧ್ಯಾತ್ಮಿಕ ಸಾಗರದೆಡೆ ದೂರದಿಂದೆಲ್ಲೋ ಕೂಗಿ ಕರೆಯುತ್ತಿರುವ ಮುರಳಿಯ ಕರೆಗೆ ' ಎನ್ನಬೇಕಿದೆ'.. ಒಮ್ಮೆ ನಾದಕ್ಕೆ ಸೋತರೇ ಇನ್ನೆಂದಿಗೂ ಯಾವುದಕ್ಕೂ ಸೋಲಲಾರರು,ಒಮ್ಮೆ ನಾದವನ್ನು ಅರಸಿ ಅಲ್ಲಿ ತಲುಪಿದ್ದೆ ಆದರೆ ಮತ್ತೆಂದು ಹಿಂದಕ್ಕೆ ಬರಲಾರಿರಿ,. ಮೋಹಕ ಆಧ್ಯಾತ್ಮಿಕ ಧ್ವನಿಯ ಶಕ್ತಿಯ ಸುಖ ಎಂದಿಗೂ ನಾಶವಾಗಲಾರದು.... ಯಾವ ಮೋಹನ ಮುರಳಿಯ ಕರೆಯೋ”....ಯಾವ ಬೃಂದಾವನದ ಸೆಳೆತವೋ”....ಕೊನೆಗೆ  ಶಾಶ್ವತ ಸುಖದತ್ತ ಕೊಂಡೊಯ್ದಿತ್ತು......
  


Thursday 28 January 2016

                                                     ಕನಸುಗಳ ಬದುಕು....



                   ಸಂಜೆ ಕಾಲೇಜಿನಿಂದ ಬಂದು ಕಾಫಿ ಹೀರುತ್ತಾ ಬೆಚ್ಚಗೆ ಕೂತಿದ್ದೆ.. ಹೊರಗಡೆ ಮಳೆಯ ಹನಿಗಳು ಚಟಪಟಿಸುವ ಮೊದಲೇ ಗೆಳತಿ ದೀಪ್ತಿ ಕೂಗಿ ಕರೆದಾಗಿತ್ತು....... "ಅಕ್ಷೂ ಬೇಗ ಬಾರೆ ಮಳೆ ಬರ್ತಿದೆ ನೆನೆಯೋಣ''...
ಕರೆದಿದ್ದೇ ತಡ ಇರು ದೀಪು ಬಂದೆ ಎನ್ನುತ್ತಾ ಅರ್ಧ ಉಳಿದ ಕಾಫಿಯನ್ನು ಹಾಗೇ ಇಟ್ಟು ಅಂಗಳಕ್ಕೆ ಓಡಿದ್ದೆ .....!

            ಸುಮಾರು ಗಂಟೆಗಳ ಕಾಲ ನೆನೆದಾಟ.,ಮಳೆ ಪ್ರಾರಂಭದಲ್ಲಿ ನಾವಿಬ್ಬರಿದ್ದವರು ಆಮೇಲಾಮೇಲೆ ಹಾಸ್ಟೆಲ್ ಹುಡುಗಿಯರೆಲ್ಲಾ ನೆನದದ್ದೇ... ಅಡಿಗೆ ಆಂಟಿ ಲಲಿತಮ್ಮ ಕೋಲು ತಂದಾಗಲೇ ಅಂಗಳದಿಂದ ಮೇಲೆ ಹತ್ತಿದ್ದು....
ಆಮೇಲೆ ನಿಲ್ಲದ ಜ್ವರ,ಶೀತ ಏನೇ ಇರಲಿ ಆ ಚಿಕ್ಕ-ಪುಟ್ಟ ಸಂಗತಿಗಳು ಕೊಡುವ ಮಜವೇ ಬೇರೆ..... ಮೈ ನಡುಗಿಸುವ ಚಳಿಯಲ್ಲೂ ನಡುಗುತ್ತಾ  ice cream ತಿನ್ನೋದ್ರಲ್ಲಿನ ಖುಷಿ, cadburys ಅನ್ನುಪುಟ್ಟ ಮಕ್ಕಳಂತೆ  ಬಾಯ್ತುಂಬ ಮಾಡಿಕೊಂಡು ತಿನ್ನುವುದರಲ್ಲಿನ ಮಜ,.ಚಂದಾಮಾಮನ ಜೊತೆ ಮಾಡುವ ಬೆಳದಿಂಗಳ ಊಟದ ಸ್ವಾದ,ಗೆಳತಿಯ ತಟ್ಟೆಗೆ ಕೈ ಹಾಕಿ ಕೇವಲ ಚಿತ್ರಾನ್ನದಲ್ಲಿನ ಶೇಂಗಾಗೋಸ್ಕರವಷ್ಟೇ ನೆಡೆಸುವ ಕಿತ್ತಾಟದಲ್ಲಿಯೂ, ತೀಟೆಯಲ್ಲಿಯೂ ಸಿಗೋ ಸಂತೋಷ ಅಥವಾ enjoyment ಅನ್ನು ನೆನಸಿಕೊಂಡ್ರೇ ಮನಸ್ಸು ಹಿಗ್ಗುತ್ತೆ......

                       ಜೀವನವನ್ನು ಸೀರಿಯಸ್ ಆಗಿ ತಗೋ ಅಂತ ಎಲ್ಲರೂ lecture ಕೊಡ್ತಾರೆ... ಆದರೆ ನನ್ನ ಪ್ರಕಾರ Be like a child sometime.,do crazy and stupid things which gives u happy,.. ನಮ್ಮೊಳಗಿನ ಖುಷಿಯನ್ನು ನಾವೇ ಹೊರತರುವುದು ಅಂದ್ರೆ ಹೀಗೇನೆ..... ಈಗಿನ ಕೃತಕ ಜೀವನದಲ್ಲಿ ನಾನು,ನನ್ನ ಸಂಸಾರ,ದುಡಿಮೆಯಷ್ಟೇ ಬಿಟ್ಟರೆ ಸಂತೋಷವನ್ನು ಸಂಪಾದನೆ ಮಾಡಲು ಯಾವ ವ್ಯಕ್ತಿಯೂ ಮುಂದಾಗುತ್ತಿಲ್ಲ.... ಮುಂದಾಗುವುದಿಲ್ಲ ಎನ್ನುವ ಬದಲು ಸಮಯವಿರಲ್ಲ ಎನ್ನಿ....... ದಿನದಲ್ಲಿ ಸ್ವಲ್ಪ ಸಮಯವಾದರೂ ತಲೆಬಿಸಿಗಳನ್ನು ದೂರಮಾಡಿ ಪುಟ್ಟ ಮಕ್ಕಳಾಗಿರಿ.,ಅದಿಲ್ಲ, ಇದಿಲ್ಲ,ಛೇ ಹಾಗಾಯಿತಲ್ಲ ಹೀಗಾಯ್ತಲ್ಲ ಅಂತ ಹಪಹಪಿಸಿದರೆ ನೀವಂದುಕೊಂಡ ಹಾಗೆ ಆಗಲ್ಲ ಅಲ್ವಾ...?ವ್ಯರ್ಥ ಕಾಲಹರಣ.,

              ....so just chill..be a child again atleast daily one tym..ಅದರಲ್ಲಿ ಸಿಗೋ ಖುಷಿ ಮತ್ತೊಂದಿಲ್ಲ.,ಜೊತೆ ಇರುವವರನ್ನು ನಗಿಸಿ,ನಗಿ.... ಇನ್ನೂ ಜಾಸ್ತಿ ಖುಷಿ ಬೇಕೆಂದ್ರೇ ಚಿಕ್ಕ ಪುಟ್ಟ ಕನಸುಗಳನ್ನು ಹೆಣೆಯಿರಿ.... ನಾನು ಮೇಲೆ ಹೇಳಿರುವ ತರಹದ ಕನಸುಗಳು... ಅವು stupidity ಅನ್ಸಿದ್ರೂ..,ಆ stupid ಕನಸುಗಳು ಈಡೇರಿದಾಗ ಆಗುವ ಖುಷಿ ಹೇಳಲಾರದ್ದು ..,

            ಕೊನೆಯದಾಗಿ ಏನೇ ಆಗಲಿ ಮೊದಲು ನಗುವುದನ್ನು ಕಲಿಯೋಣ,ಜೊತೆಗೆ ನಗಿಸುವುದನ್ನೂ,ಮಕ್ಕಳಾಗೋಣ ಜೊತೆಗೆ ಅವರಂತೆ ಮುಗ್ಧತೆಯನ್ನು ಬೆಳೆಸಿಕೊಳ್ಳೋಣ..ಜವಾಬ್ದಾರಿ, ಹುಡುಗಾಟ,ತರ್ಲೆಗಳು ಜೊತೆ-ಜೊತೆಗೆ ನಮ್ಮ ಕನಸುಗಳು.... ಎಲ್ಲವೂ ಬೇಕು.. ಕನಸುಗಳು ದೊಡ್ಡದಾಗಿರಲಿ ಚಿಕ್ಕದಾಗಿರಲಿ., But be a dreamer....share the path with your dreams.......:-)

Monday 4 January 2016

                                                        ನಿಜವಾಗಿ ಅಮ್ಮನೆಂದರೇ ....                                               

                ತನಗೆ ತಾನೇ ಪ್ರಶ್ನೆ ಹಾಕಿಕೊಂಡು ಗಂಟೆಗಟ್ಟಲೆ,ದಿನಗಟ್ಟಲೆ ಯೋಚಿಸಿದರೂಆ ಅಭಿಪ್ರಾಯ ತಪ್ಪು....ಅವಳ ತಕ್ಕಡಿ ತನ್ನ ಅಭಿಪ್ರಾಯವನ್ನೇ ಮೇಲಿರಿಸಿತ್ತು.,ತನ್ನನ್ನು ತಾನು ಸಮರ್ಥಿಸಿಕೊಂಡಿದ್ದ ರೀತಿ ಅದು....ವಿಧಿಯೇ ಇರಲಿಲ್ಲ ಸಮರ್ಥನೆ ನೂರು ಪ್ರತಿಶತ ಸರಿಯೇ ಇದ್ದಿತ್ತು.......  
 
         ಇಷ್ಟು ದಿನ ಅಮ್ಮನಾಸರೆಯ ಮುದ್ದು ಕೂಸಾಗಿ ಬೆಳೆದು,ಯಾರಿಂದಲೋ ಆಕೆ ತನ್ನ ನಿಜವಾದ ಅಮ್ಮನಲ್ಲವೆಂದು ತಿಳಿದಾಗ ಆದ ಸಂಕಟ ಹೇಳುವಂತದ್ದಲ್ಲ..ತನಗೀಗ ವರ್ಷ ೧೫ ಬೆರಳೆಣಿಸಿದ್ದಳು ಶ್ರಾವಣೀ,ತೀರಾ ತಿಳುವಳಿಕೆ ಇಲ್ಲ ಎನ್ನುವ ವಯಸ್ಸೇನೂ ಅಲ್ಲ,. ಯೋಚಿಸುವ, ಅರ್ಥ ಮಾಡಿಕೊಳ್ಳುವ ಸಹಜ ಸ್ವಭಾವ ಅವಳಲ್ಲೂ ಬಂದಿತ್ತು ....    ಅವಳುದರದಲ್ಲಿ ನವಮಾಸಗಳು ತನ್ನನ್ನು ಹುದುಗಿಸಿ ಕಾಪಾಡದಿದ್ದರೂ,ಹುಟ್ಟಿದ ಮರುಕ್ಷಣದಿಂದ ಈ ಕ್ಷಣದ ವರೆಗೂ ಕಂಡಿದ್ದು ಇವಳ ಪ್ರೀತಿಯನ್ನೇ,ತಿಂದಿದ್ದು ಇವಳ ಕೈ ತುತ್ತನ್ನೇ..'ಅಮ್ಮಾ ' ಎಂದು ಕರೆದದ್ದು ಇವಳನ್ನೇ....ಮಕ್ಕಳಿಲ್ಲದ ಆಕೆಯೂ ತನ್ನ ತಾಯ್ತನದ ಅಷ್ಟೂ ಹಾರೈಕೆಗಳನ್ನು ತೋರಿಸಿದ್ದಳು  ಎಂದು ಶ್ರಾವಣಿಗೆ ಗೊತ್ತಿತ್ತು...

                          ತಾನು ೩ ತಿಂಗಳ ಮಗುವಿದ್ದಾಗಲೇ ತಾಯಿ ಮರಣಿಸಿದ್ದಳು ಎಂಬುದಾಗಲೀ,ತನ್ನನ್ನು ಅಜ್ಜಿಯೇ ತಾಯಿಯಾಗಿ ಬೆಳೆಸಿದ್ದಳೆಂಬುದಾಗಲೀ,ಶ್ರಾವಣಿಗೆ ತಿಳಿದದ್ದು  ತನ್ನ ೧೫ ನೇ ವಯಸ್ಸಿನಲ್ಲಿ.,ಗೊತ್ತಿದ್ದೂ ಗೊತ್ತಿಲ್ಲದೆಯೋ ತಾಯಿ ಎಂದು ಒಪ್ಪಿಕೊಂಡಾಗಿದೆ.. ಈಗ ಸತ್ಯ ಗೊತ್ತಾಗಿದ್ದರೂ ಮನಸ್ಸು ಬದಲಾಗದು..... ಬದಲಾಯಿಸಲು ಸಾಧ್ಯವೂ ಇಲ್ಲ.,!ಹೆತ್ತಮ್ಮನನ್ನು ಕಳೆದುಕೊಂಡಿದ್ದ ನೋವನ್ನು ಅಜ್ಜಿಯ ಪ್ರೀತಿಯಲ್ಲಿ ಮರೆತಾಗಿತ್ತು.... ಅದೆಷ್ಟೇ ನೋವನ್ನು ಮರೆತಿದ್ದೇನೆ ಎಂದರೂ ಆಕೆಯ ೧೫ನೇ ವರ್ಷದಿಂದ ಕಾಡುತ್ತಿದ್ದ  ತಾಯಿಯ ಸ್ಥಾನವನ್ನು ಯಾರೂ ತುಂಬಲಾರರು ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಬರಾಟೆಯಲ್ಲಿದ್ದಳು.. ನಿಜವಾಗಿ ತಾಯಿ ಎಂದರೆ ಯಾರು? ?ನವಮಾಸಗಳೂ ಗರ್ಭದಲ್ಲಿ ಹುದುಗಿಸಿ ಪೋಷಿಸಿದವಳೇ ಅಥವಾ ಜನಿಸಿದ ನಂತರ ಮಗುವನ್ನು ಪೋಷಿಸಿ ಬೆಳೆಸಿ ಸನ್ಮಾರ್ಗದಲ್ಲಿ ಹೋಗುವಂತೆ ಪ್ರೇರೇಪಿಸಿದವಳೇ? ?ಕೆಲವೊಮ್ಮೆ ಹೆತ್ತ ತಾಯಿಯೂ ಮಕ್ಕಳನ್ನೂಬೀದಿಯಲ್ಲಿ ಮಲಗಿಸಿ ಹೋದ ದಾಖಲೆಗಳಿಲ್ಲವೇ..?ಕೆಲವೊಮ್ಮೆ ಹೆತ್ತ ತಾಯಿಯೇ ಮಕ್ಕಳನ್ನು ಕೊಂದು ತಾನು ಸತ್ತ ದಾಖಲೆಗಳಿಲ್ಲವೇ..?ತಾಯಿ ಇಲ್ಲದ ಪರದೇಶಿ ಎಂದು ಅನುಕಂಪಿಸುವ ಜನ ಆ ತಾಯಿಯ ಪ್ರೀತಿಯನ್ನು ಕೊಡಲು ಮುಂದಾಗುವುದಿಲ್ಲ.. ಬದಲಿಗೆ ಇನ್ನೂ ನಾಟಕೀಯ ಅನುಕಂಪವನ್ನು ತೋರಿ ಮನಃ ನೋಯಿಸುತ್ತಾರೆ..ಬೀಳುವುದನ್ನೇ ಕಾರುತ್ತಾ ಕೂರುವ ಈ ಕಾಲದಲ್ಲಿ ಕೈ ಹಿಡಿದು ಎತ್ತುವ ಸಾಹಸಕ್ಕೆ ಯಾರೂ ಮುಂದಾಗುವುದಿಲ್ಲ ಅದು ಅವರಿಗೆ ಸಾಧ್ಯವೂ ಇಲ್ಲವೆನ್ನಿ,..!ಇತರರ ಕಣ್ಣೀರಿಗೆ ಕಾಯುತ್ತಾ ಅವರನ್ನು ನೋಯಿಸುವ ಮನಸ್ಸಿರುವವರಿಗೆ ಅಂತಹ ಒಳ್ಳೆಯ ಮನಸ್ಸೆಲ್ಲಿಂದ ಬರಬೇಕು ....??ಅದೆಷ್ಟೋ ಸಾವಿರ ಜನರಲ್ಲಿ ಒಬ್ಬರಿಗೆ ಅಂತಹ ಮನಸ್ಸಿದ್ದರೂ ಅದನ್ನು ಸಹಿಸದ ಮೂರ್ಖ ಜನರೂ ಇರುತ್ತಾರೆ....!!

                    ಶ್ರಾವಣಿಗೆ ಇನ್ನೂ ನೆನಪಿತ್ತು ಅಜ್ಜಿ(ಅಮ್ಮ) ಹೇಳುತ್ತಿದ್ದ ಕಥೆ.. ಶ್ರೀ ಕೃಷ್ಣ ಪರಮಾತ್ಮನಿಗೆ ಹೆತ್ತ ತಾಯಿ ದೇವಕಿಯೇ ಆಗಿದ್ದರೂ ಅವನ ಎಲ್ಲಾ ಸಾಕು-ಸಲಹುಗಳ ಜವಾಬ್ದಾರಿ ಯಶೋದೆಯದ್ದೇ ಆಗಿತ್ತು ಅಂತ.,ಕೃಷ್ಣ ನನ್ನು ಭೂಮಿಗೆ ತಂದ ತಾಯಿ ದೇವಕಿಯೇ ಆಗಿದ್ದರೂ ಆತ ಹುಟ್ಟಿದಾಗಿನಿಂದ ಆತನ ಜವಾಬ್ದಾರಿ. ಯಶೋದೆಯದು....ಇವರೀರ್ವರಲ್ಲಿ ಇಬ್ಬರೂ ತಾಯಿಯರೇ,ಯಾರ ಪ್ರೀತಿ,ಮಮತೆಯನ್ನು ಅಳತೆ ಮಾಡಲಾಗದು,. ಇದನ್ನೆಲ್ಲಾ ಕೇಳಿ ಶ್ರಾವಣಿಯೂ ಸಂತೋಷ ಪಡುತ್ತಿದ್ದಳು ತನಗೂ ಇಬ್ಬರು ತಾಯಂದಿರೆಂದು......!!

                ಜೀವನದಲ್ಲಿ ಅಮ್ಮ ಇಲ್ಲ ಎಂಬುದೇ ಕೊರಗಲ್ಲ,ಆ ಸ್ಥಾನವನ್ನು ಯಾರೂ ನೀಡದಿದ್ದರೆ ಅದು ಕೊರಗು.,ಯಾರು ಆಪ್ಯಾಯಮಾನವಾದ ನಿಶ್ಕಲ್ಮಶ ಪ್ರೀತಿಯನ್ನು ಕೊಡುತ್ತಾರೋ ಅಲ್ಲಿ ಅಮ್ಮ ಇದ್ದಾಳೆ....ಅಮ್ಮನೆಂದರೇ ಅರ್ಥವಿಷ್ಟೇ ನಿಶ್ಕಲ್ಮಶ ಪ್ರೀತಿ,ಮಮತೆ,ಕಾಳಜಿ...... ಅವಳು ಅಂದರೆ ಏನೋ ವಿಭಿನ್ನ...ಹೀಗೆ ಒಬ್ಬ ಆದರ್ಶ ಅಮ್ಮನಿಗಿರುವ ಎಲ್ಲಾ ಲಕ್ಷಣಗಳು ತನ್ನಮ್ಮನಲ್ಲಿತ್ತು.,ಆದರೇ ಕರುಳು ಬಳ್ಳಿಯ ಸಂಕೋಲೆಯ ಹೊರತಾಗಿ ...!!

             ತನ್ನನ್ನು ಸಲಹಿದ್ದ ಆಕೆ ತನಗೆ ಬರೀ ತಾಯಿಯಲ್ಲ....ಮಹಾತಾಯಿ..ಹ್ಞೂ....ಅಂತೂ ತನ್ನ ಎಲ್ಲಾ ಪ್ರಶ್ನೆ ಗಳಿಗೆ ಉತ್ತರ ಕಂಡುಕೊಂಡಿದ್ದಳು ಶ್ರಾವಣೀ ...ತನ್ನನ್ನು ಅನಾಥೆ ಎಂದು ತುಚ್ಚೀಕರಿಸುತ್ತಿರುವವರ ಮುಂದೆ ದಿಟ್ಟ ಹೆಜ್ಜೆಗಳನ್ನು ಹಾಕಲು ಶ್ರಾವಣೀ ಸನ್ನದ್ದಳಾಗಿದ್ದಳು,ಆ ದಿಟವಾದ ಹೆಜ್ಜೆಗಳು ಎಂದಿಗೂ ಯಾರಿಗೋ ಹೆದರಿ ಹಿಂದೆ ಸರಿಯುವ ಹೆಜ್ಜೆಗಳಾಗಿರಲಿಲ್ಲ.......                               

Friday 11 December 2015

                                                                          ಅವಳಂತರಾಳ.......                    


           ತನ್ನ ಬದುಕಿನ ಅಷ್ಟೂ ಸಮಯವನ್ನು ಅವನಿಗಾಗಿ ಕಳೆದಿದ್ದಳಾಕೆ,ಇದ್ದಾಗ ಅವನ ಜೊತೆ ಅವನಿಲ್ಲದಾಗ ಅವ ಜೊತೆ ಇದ್ದ ಕ್ಷಣದ ನೆನಪುಗಳ ಜೊತೆ......ಅವರಿಬ್ಬರ ನಡುವೆ ಸ್ನೇಹವೋ,ಪ್ರೀತಿಯೋ ಅಥವಾ ಮೋಹವೋ ಏನೋ..!!ಅಥವಾ ಅವೆಲ್ಲವೂ ಅವರಲ್ಲಿ ಬೆಸೆದಿತ್ತು....ಅವಳಂತೆ ಈ ಪ್ರಪಂಚದಲ್ಲಿ ಯಾರೂ ಯಾರನ್ನೂ ಪ್ರೀತಿಸಲಾರರು..ಸುದೀರ್ಘ ನಿಶ್ಕಲ್ಮಶ ಪ್ರೀತಿಯದು..ಮಾತಿನಲ್ಲಿ ಹೇಳಲಾಗದ,ಬರವಣಿಗೆಯಲ್ಲಿ ಗೀಚಲಾಗದ ಅವ್ಯಕ್ತ ಅಲೌಕಿಕ ಪ್ರೇಮವದು....!!    ಕೃಷ್ಣ... ರಾಧೆಯ ಏದುಸಿರು,ಅವಳ ಕಾತರ,ಅವಳ ದನಿ,ಅವಳ ನೆನಪು.....ನಿಜ ಕೃಷ್ಣ ರಾಧೆಯ ಅಂತರಾಳ......!!    
           
                  ಪ್ರೀತಿಗೆ ನಿಜವಾದ ಹೆಸರದು ರಾಧೆ..ತಮ್ಮ ಸರ್ವಸ್ವವನ್ನೆಲ್ಲವನ್ನೂ ಕೃಷ್ಣನಗಳಿಗರ್ಪಿಸಿದ ಪುಣ್ಯ ಸ್ತ್ರೀಯರಲ್ಲಿ  ಒಬ್ಬಳು ರಾಧೆ..ಭೌತಿಕ ಆಸೆ-ಆಕಾಂಕ್ಷೆಗಳನ್ನು ಮೂಲೆ ಗುಂಪಾಗಿಸಿ ದೇವೋತ್ತಮನ ಚರಣಗಳಿಗೆ ತನು-ಮನಗಳೊಂದಿಗೆ ಅರ್ಪಿಸಿಕೊಂಡಿದ್ದಳಾಕೆ..ಪ್ರತಿಯೊಂದು ಚರಾಚರಗಳಲ್ಲೂ ಅವನನ್ನೇ ಕಾಣುತ್ತಿದ್ದಳಾಕೆ..ಅವನ ಕೊಳಲಿನ ದನಿಗೆ ಚಾತಕ ಪಕ್ಷಿ ಮಳೆಯ ನಿರೀಕ್ಷೆಯಲ್ಲಿ ಕಾಯುವಂತೆ  ಪರಿತಪಿಸುತ್ತಿದ್ದಳಾಕೆ..ಬರೀ ಅವನಿಗಾಗಿ,ಅವನ ಕೊಳಲಿನ ದನಿಗಾಗಿಯಷ್ಟೇ.....ಅವನನ್ನು ಪಡೆಯಬೇಕೆಂಬ ಹಂಬಲವಷ್ಟೇ ಆಕೆಯಲ್ಲಿ,ಅವನ ಕಣ್ಣಲ್ಲಿ ತನ್ನ ತಾನು ಕಾಣಬೇಕೆಂಬ ಕೋರಿಕೆಯಷ್ಟೇ ಮನಸ್ಸಿನಲ್ಲಿ...
         
            ಕೃಷ್ಣ., ಆತನಿಗಾಗಿ ಪ್ರತೀ ನಿಮಿಷವೂ ತುಡಿತ,ಅದ್ಯಾರೇ ಬರಲು ಅವನೇ ಬಂದನೆಂಬ ನಿರೀಕ್ಷೆ ಅವಳ ಕಣ್ಗಳಲ್ಲಿ,ಬಾಯಲ್ಲಿ ಅವನದೇ ಸುದ್ದಿ ಪಟ-ಪಟನೇ ಮುತ್ತು ಸುರಿದಂತೆ ಬರುತ್ತಿತ್ತು,ಯಾರೇ ಬರಲಿ ಅವನ ಬಗೆಗಿನ ತನ್ನ ಪರಿತಾಪವನ್ನುವ್ಯಕ್ತಪಡಿಸುವ ಪರಿ.. ಅನ್ನಿಸುವುದಂತೂ ನಿಜ ಇವಳೆಂತಾ ಹುಚ್ಚಿ..,ಅಲ್ಲ ಅಲ್ಲ ಆ ಕೃಷ್ಣನೆಂತಾ ಮೋಡಿಗಾರ....!!ಅವಳೆಲ್ಲಾ ಕನಸುಗಳಲ್ಲಿ ತನ್ನನ್ನು ಮಾತ್ರಾ ಆವರಿಸಿಕೊಂಡಿದ್ದ,ಅವಳ ಮನಸ್ಸಲ್ಲಿ ತನ್ನ ನೆಲೆಯನ್ನಷ್ಟೇ ಬಿತ್ತರಿಸಿಕೊಂಡಿದ್ದ, ಅವಳ ಪ್ರೀತಿ-ವಿರಹಗಳ ಅಧಿಕೃತ ಅಧಿಕಾರಿಯಾಗಿದ್ದ ಕೃಷ್ಣನೆಂತಾ ಮೋಡಿಗಾರ ಎಂಬ ಪ್ರಶ್ನೆ ಬರಬೇಕಾದ್ದೇ...!!      

   ಪ್ರೀತಿ ಕೊಟ್ಟ ರಾಧೆಗೆ ಮಾತು ಕೊಟ್ಟ ಮಾಧವಾ..!ಕೊಟ್ಟದ್ದು ಬರಿಯ ಮಾತನ್ನಷ್ಟೇ,ರಾಧೆಯ ಉಸಿರಿನ ಏರು ಪೇರುಗಳಲ್ಲಿ ಬರೀ ನೆನಪುಗಳಾಗಿಯಷ್ಟೇ ಉಳಿದು,ತಾನು ಮರೆಯಾಗಿದ್ದ....!         ಎಲ್ಲಾ  ಜೀವಿಗಳ ಜೀವಾತ್ಮನಾಗಿರುವವನು ರಾಧೆಯ ಪ್ರೀತಿಯನ್ನು ತಿಳಿದೂ ದೂರವಾದನೇ..??ಕಾರಣವಿದ್ದು ಅನಿವಾರ್ಯವಾಗಿ ಗೆಳತಿಯನ್ನು ಬಿಟ್ಟು ಹೊರಟನೇ..??ಕೊನೆಗೆ ತಾನಿರದ ರಾಧೆಯ ಪರಿಸ್ಥಿತಿಯ ಅರಿವಿದ್ದೂ ಮೂಖವಾಗಿ ಮರೆಯಾದನೇ....??    
         
                  ......ಮಹಾಪ್ರವಾಹ.....ಮಹಾಪ್ರವಾಹ ತಡೆಯುವರಿಲ್ಲ ಪಾತ್ರವಿರದ ತೊರೆ ಪ್ರೀತಿ..ತೊರೆದರು ತನ್ನ, ತೊರೆಯದು ಪ್ರಿಯನ ರಾಧೆಯ ಪ್ರೀತಿಯ ರೀತಿ..ಸಾಲುಗಳೇಕೋ ಮನದಲ್ಲಿ ಗುನುಗುನಿಸಿ ಮರೆಯಾಗಿತ್ತು,.ರಾಧೆಯ ಪ್ರೀತಿಯ ಪರಿ ಒಮ್ಮೆ ಹೊಟ್ಟೆಕಿಚ್ಚು ತರಿಸಿ ದೂರವಾಗಿತ್ತು.....ಕೊನೆಯದಾಗಿ ರಾಧೆಯ ನಿಶ್ಕಲ್ಮಶ ಪ್ರೀತಿಯ ಗಟ್ಟಿತನಕ್ಕೆ,ತ್ಯಾಗದ ಉದಾರತೆಗೆ,ಕೃಷ್ಣನ ಬರುವನ್ನೇ ಕಾಯುತ್ತಾ ಕುಳಿತಿರುವ ಅವಳುಸಿರಿನ ತಾಳ್ಮೆಗೆ ಮನಸ್ಸೊಮ್ಮೆ ಶ್ಲಾಗಿಸಿತ್ತು..........

Thursday 19 November 2015

                                ಅವನೊಮ್ಮೆ ಹುಟ್ಟಿ ಬಂದಿದ್ದರೇ...!!

           
         
            ಆತ ಪರಮ ಸುಂದರನಂತೆ,ನಮ್ಮ ಉಸಿರು ಅಥವಾ ಪ್ರಾಣಾತ್ಮ ಅವನೇ ಆಗಿದ್ದಾನಂತೆ,ಸ್ತ್ರೀ ಲೋಲನಂತೆ ಆ ದೇವೋತ್ತಮ..ಆತ ನಮ್ಮೆಲ್ಲರಲ್ಲೂ ಬೆರೆತು ಹೋಗಿದ್ದಾನಂತೆ ಅವನನ್ನು ನಾವೇ ಕಂಡುಕೊಳ್ಳಬೇಕಂತೆ..!ಆತನೇ ಪ್ರತೀ ಜೀವಿಯ ಪರಮ ಗುರಿಯಂತೆ..ಅವನ ಭಕ್ತರಿಗೆ ಸೋಲೇ ಇಲ್ಲವಂತೆ ಹಾಗೆ ಅವನನ್ನರಿಯುವುದೂ ಅತೀ ಕಷ್ಟವಂತೆ.. ಅಷ್ಟೇ ಅಲ್ಲ ಬೃಂದಾವನದ ಗೋಪಿಯರು ಸಂಪೂರ್ಣವಾಗಿ ಇವನಿಗೆ ಶರಣಾಗಿದ್ದರಂತೆ,ಇವನ ಒಂದು ನೋಟ,ಮಾತು,ಪ್ರೀತಿಗಾಗಿ ನಿದ್ರಾಹಾರವಿಲ್ಲದೆ ಹಪಹಪಿಸುತ್ತಿದ್ದರಂತೆ.. ಅದೆಲ್ಲಾ ಜೀವಿಗಳ ಪರಮ ಪ್ರಭು "ಕೃಷ್ಣ " ನಂತೆ.... ಇನ್ನೂ ಏನೇನೋ....!!
               ಅದೆಷ್ಟೋ ಗೋಪಿಯರು ಕೃಷ್ಣನಿಗಾಗಿ ತಮ್ಮದೆಲ್ಲವನ್ನೂ ಧಾರೆ ಎರೆದು ಅವನಿಗಾಗಿ ವಿರಹ ತಾಳಿದ್ದರೆಂದರೇ ಅವನೆಷ್ಟು ಸುಂದರನಿದ್ದಿರಬಹುದು? ಸೋದರಮಾವ ಕಂಸನನ್ನು ಸದೆಬಡಿಯಲು ಮಥುರೆಗೆ ಹೋದಾಗ ಕುಬ್ಜೆಯಿಂದ ಕೇವಲ ಶ್ರೀಗಂಧವನ್ನು ಪಡೆದು,ಆಕೆಗೆ  ಅತಿಷಯವಾದ ಅಂದವನ್ನು ಕೊಟ್ಟಿದ್ದನೆಂದರೆ ಆತನೆಷ್ಟು ಕರುನಾಳುವಾಗಿರಬಹುದು?
Hmmm ಕೇವಲ ಅವನ ಹೆಸರನ್ನು ಜಪಿಸಿದರೆ ಸಾಕು ಮಹಾ ಪಾತಕಗಳೇ ನಾಶವಾಗುತ್ತೆ ಎಂದರೆ ಅವನ ನಾಮವೆಷ್ಟು ಪವಿತ್ರವಾಗಿರಬಹುದು..?ಮಹಾನ್ ರಾಕ್ಷಸರನ್ನೇ ಸಂಹರಿಸಿ ಮೆರೆದಿದ್ದನೆಂದರೇ ಆತನೆಷ್ಟು ಶಕ್ತಿಶಾಲಿ?ನಮ್ಮಂತಹ ಎಷ್ಟೋ ಜೀವಿಗಳ ವಿಶಿಷ್ಟ ಸೃಷ್ಟಿಯ ಮೂಲವೇ ಇವನು ಎಂದರೆ ನಿಜವಾಗಿ ಆಶ್ಚರ್ಯ ವೇ ಸರಿ,.ಈತನೆಷ್ಟು ಕ್ರಿಯಾಶೀಲನಾಗಿದ್ದಿರಬಹುದು? ?
        ಇದನ್ನೆಲ್ಲಾ ಕೇಳುತ್ತಿದ್ದರೆ ಅಥವಾ ಅವನ ಬಗೆಗೆ ಓದುತ್ತಿದ್ದಾಗಲೆಲ್ಲಾ ಅನೇಕ ಸಲ ಅನ್ನಿಸಿದ್ದಂತೂ ನಿಜ ಕೃಷ್ಣ ಮತ್ತೆ ಅವತರಿಸಬಹುದಿತ್ತಲ್ವಾ ಅಂತ....! ಈಗ ನೆಡೆಯುತ್ತಿರೋ ಘಟನೆಗಳೂ ಸಹ ನನ್ನ ಚಿಂತನೆಗೊಂದು ಕಾರಣ, ಸತ್ಯವಂತರಿಗಿದು ಕಾಲವಲ್ಲಯ್ಯಾ ಎಂಬಂತೆ ತನ್ನ ಸ್ವಾರ್ಥ ಸಾಧನೆಗೆ ಇತರರನ್ನು ಬಳಸಿಕೊಂಡು ಇತರರ ಕಾಲೆಳೆದು ಬದುಕುವ ಕಾಲವಿದು.. ನ್ಯಾಯ,ಸತ್ಯ,ಪ್ರಾಮಾಣಿಕತೆಯನ್ನು ಕಾಲಿನ ಕಸವಾಗಿಸಿ ಬದುಕು ಸಾಗಿಸುವವನಿಗಿಂದು ಕಾಲ,ತನ್ನದೆಲ್ಲವನ್ನೂ ಪರಮಾತ್ಮನಿಗೆ ಅರ್ಪಿಸಿ ತನ್ನಷ್ಟಕ್ಕೆ ತಾನು ಬದುಕು ಸಾಗಿಸುವವನಿಗೆ ಕಣ್ಣೀರು,ನೋವು,ನಿಂದೆ ಕಟ್ಟಿಟ್ಟ ಬುತ್ತಿ.. ಇವೆಲ್ಲಾ ಕ್ರೂರತನದ ಅಟ್ಟಹಾಸ ನಿಲ್ಲುವುದೆಂದು?ಪ್ರತಿಯೊಬ್ಬರಲ್ಲೂ ಉತ್ತಮತೆ ಮೂಡುವುದ್ಯಾವಾಗ??
              ಮತ್ತೆ ಅದೇ ನಿರೀಕ್ಷೆ ,ಅವನ ಕೊಳಲ ನಾದಕ್ಕೆ ನಮ್ಮೆಲ್ಲರನ್ನೂ ಸೆರೆಹಿಡಿದಿದ್ದರೇ,...!! ಒಮ್ಮೆ  ನಮ್ಮೆಲ್ಲರ ಹೃದಯ ಸಿಂಹಾಸನದಲ್ಲಿ ಕೂತ ಅವನೊಮ್ಮೆ ಹೊರ ಬಂದಿದ್ದರೆ ಎಲ್ಲಾದಕ್ಕೂ ತಿಲಾಂಜಲಿ ಇಡಬಹುದಿತ್ತೋ ಏನೋ ಅಂತ....

Friday 6 November 2015

                                                    Dreams V/S Reality....                                    
                       ಅದೆಷ್ಟೋ ವರ್ಷಗಳೇ ಕಳೆದು ಹೋಗಿವೆ.. ಒಂಟಿತನ ಈ ಜೀವಕ್ಕೆ permanent ಅನ್ಸಿಬಿಟ್ಟಿದೆ .. ಸಣ್ಣ ಪುಟ್ಟದ್ದಕ್ಕೂ ಕಣ್ಣೀರಿಡುವ ಹುಡುಗಿ ಈಗ practical life ಗೆ ಕಾಲಿರಿಸಿ ಬಹಳಾ ಕಾಲವಾಗಿತ್ತು.. ಎಲ್ಲಾ ನಿನ್ನ ಕೃಪೆ ಶರತ್ ಎಂದು ಹಣೆಗೆ ಬೊಟ್ಟಿಡುತ್ತಾ ಅವನ ನೆನಪು ತಂದುಕೊಂಡಳು ಸಂಧ್ಯಾ.... ಎಷ್ಟೆಲ್ಲಾ ನೋವು ಕೊಟ್ಟು ಬಿಟ್ಟಿದ್ದ ತನಗಾತ,. ಅಮ್ಮನಷ್ಟೇ ಇಷ್ಟ ಪಡುತ್ತಿದ್ದೆ ಅವನನ್ನು ಕಣ್ಣೀರು ಉಕ್ಕಳಿಸಿದರೂ ತಡೆದು ನಿಲ್ಲಿಸಿದ್ದಳು ಸಂಧ್ಯಾ.. ಪ್ರೀತಿಗೆ ಅರ್ಥ ಗೊತ್ತಿಲ್ಲದ ಒಂದು ಕಲ್ಲಿಗೇಕೆ ಅಳಲಿ? ?ತಿರಸ್ಕಾರದಿಂದ ಗಟ್ಟಿಯಾದರೂ ಮತ್ತದೇ  ನೆನಪು ಹಿಂಡಿ ಹಿಪ್ಪೆ ಮಾಡಿತ್ತು...                                                  
                        ಇವನ ರೀತಿಯೇ ಅಂದು ನಾನು ಕೂಡ practical ಆಗಿ think ಮಾಡಿದ್ದೇ ಆಗಿದ್ದರೆ ಈ ನೋವು ಇರುತ್ತಿರಲಿಲ್ಲವೇನೋ..!! ಸಂಬಂಧಗಳಿಗೆ,ಪ್ರೀತಿಗೆ ಬೆಲೆ ಕೊಡದೇ ನಾನು ಕೂಡ ಸ್ವಾರ್ಥ ಸಾಧಿಸಿದ್ದರೆ ಈ ಪರಿಸ್ಥಿತಿ ಇರುತ್ತಿರಲಿಲ್ಲ ಅನ್ಸುತ್ತೆ..  ಇದ್ದಕ್ಕಿದ್ದಂತೆ ಬದಲಾಗಿ ಹೋಗಿದ್ದ ಶರತ್.. !!                              

                'Be practical yar,why you getting soo emotional' ಸಂಧ್ಯಾ..??let it be.. ನನ್ನ ಆಸೆ ಬಿಟ್ಬಿಡು,ನಿನ್ನ lyf ಬಗ್ಗೆ ಗಮನ ಕೊಡು,.ನನಗೆ ನನ್ನ business ಮುಖ್ಯ..ಅದನ್ನು improve ಮಾಡ್ಬೇಕು,ಅದಾದ್ಮೇಲೆ ಬೇರೆ ಯೋಚ್ನೇ..ಹ್ಞಾ..ಆ ಬೇರೆ ಯೋಚನೆ ನೀನೆ ಆಗಿರ್ತೀಯ ಅಂತ ಅನ್ಕೋಬೇಡ,ನಿಮ್ಮನೇಲಿ ಯಾರನ್ನು ತೋರುಸ್ತಾರೋ ಅವರನನ್ನೇ ಮದುವೆ ಆಗ್ಬಿಡು..ಏನೋ ಹುಡುಗು ಬುದ್ಧಿ ಪ್ರೀತ್ಸಿದ್ದೆ......ಈಗ ಊಹ್ಞು  ಆಗದ ಮಾತು..?? ವ್ಯಂಗ್ಯವಾಗಿಯೇ ಮಾತು ಮುಗಿಸಿದ್ದ ಶರತ್. ಅಂದು ನಮ್ಮಿಬ್ಬರ  ಬದುಕು ಎನ್ನುತ್ತಿದ್ದ ಶರತ್ ಆ ಬದುಕನ್ನೇ ಇಬ್ಬಾಗವಾಗಿಸಿದ್ದ,.ಜೊತೆ ಬಾದುಕುವ ಕನಸನ್ನು ಹೊತ್ತಿದ್ದ ಕನಸನ್ನು ನುಚ್ಚು ನೂರಾಗಿಸಿದ್ದ.. ಕಾರಣವಿಲ್ಲದೇ ಪ್ರೀತಿಯನ್ನು ಕೊಂದಿದ್ದ..ಓದು ಮುಗಿದ ನಂತರ ಹಳ್ಳಿ ತೊರೆದ ಮೇಲೆ ಎಲ್ಲವನ್ನೂ ಮರೆತಿದ್ದ,. .  
           ಆ ಮುಖದಲ್ಲಿ 'ನಾನು' ಅನ್ನೋ ಸ್ವಾರ್ಥವನ್ನು ಬಿಟ್ಟರೆ ಪ್ರೀತಿ, ಕರುಣೆ,ಪ್ರಾಮಾಣಿಕತೆ ಅಕ್ಷರಶಃ ಶೂನ್ಯವಾಗಿತ್ತು....!!ಆತನನ್ನು    ಪ್ರೀತಿಸಿದ್ದ ತಪ್ಪಿಗೆ ದೊಡ್ಡ ಪಾಠವನ್ನು ಕಲಿತಾಗಿತ್ತು....     ಈಗಿದ್ದನ್ನೆಲ್ಲಾ ನೆನಪಿಸಿ ಏನಾಗುವುದಿದೆ Dn't get tooo emotional ಸಂಧ್ಯಾ,.let it be ತನಗೆ ತಾನೆ ಹೇಳಿಕೊಂಡಳು.,ಒಂದು ಕಾಲದಲ್ಲಿ ಶರತ್ ಹೇಳಿದ್ದ....!! ಜೀವನದಲ್ಲಿ ನಮ್ಮ ಜೊತೆ ಸ್ವಲ್ಪ ಕಾಲ ಜೊತೆ ಇದ್ದ ಪ್ರತಿಯೊಬ್ಬರೂ ಏನನ್ನಾದರೂ ನೀಡಿಯೇ ಹೋಗಿರುತ್ತಾರೆ.,ನೋವು ಅಥವಾ ಸಂತೋಷ,.ಯಾವುದೇ ಆಗಿರ್ಲೀ ಅದೊಂದು ಪಾಠ... ಜೀವನದಲ್ಲಿ ಕೆಲ ವ್ಯಕ್ತಿಗಳನ್ನ,ಕೆಲ ಸನ್ನಿವೇಶಗಳನ್ನ,ಕೆಲ ಮಾತುಗಳನ್ನ ಸುಲಭವಾಗಿ ಮರೆಯಲ್ಲಿಕ್ಕಾಗಲ್ಲ...!!  
                 ನೆನಪಿನ ನಾವೆಯಲ್ಲಿ ತೇಲುತ್ತಿದ್ದವಳಿಗೆ ಎಚ್ಚರಿಸಿದ್ದು ಅವಳ office cab ನ ಹಾರನ್ನಿನ ಸದ್ದು.. ನೆನಪುಗಳಿಗೆ ಸಂಜೆ ಸಿಗುವೆನೆಂದು bye bye ಮಾಡಿ ಗಾಡಿ ಹತ್ತಿ ಬದುಕಿನತ್ತ ಹೊರಟಿದ್ದಳು....
                                                                                                     -Akshatha H.S

Monday 5 October 2015

                           
 "ಆತ್ಮಸಾಕ್ಷಿ "....
                ಅಪ್ಪನ ಜೇಬಿನಿಂದ ಐದು ರೂಪಾಯಿಯ ಒಂದು ನೋಟು ಮತ್ತು ಒಂದೆರಡು ರೂಪಾಯಿಯ ಚಿಲ್ಲರೆಯನ್ನು ಎಗರಿಸಿದ್ದ ಗಣೇಶನೇನೂ ಅಪ್ಪನೆದುರುರಿಗೆ ಸಿಕ್ಕಿಬಿದ್ದಿರಲಿಲ್ಲ..ಆದರೆ ಅದೇ  ಹಣವನ್ನು ಅಂಗಡಿಗೆ ಕೊಟ್ಟು ಬೊಂಬಾಯಿ ಮಿಠಾಯಿ ತಿಂದದ್ದನ್ನು ಈಗಲೂ ನೆನಪಿಸಿಕೊಳ್ಳುತ್ತಾನೆ.,ಅದೇನೋ ಹುಡುಗು ಬುದ್ದಿ  ತಪ್ಪು ಮಾಡಿಬಿಟ್ಟಿದ್ದಾನೆ.
ಈ ವಿಚಾರ ಅಂದೇ ಅವರಪ್ಪನಿಗೋ ಅವರಮ್ಮನಿಗೋ ಗೊತ್ತಾಗಿದ್ದರೇ ನಾಲ್ಕು ಬುದ್ದಿ ಮಾತು ಹೇಳಿಯೋ,ಎರಡು ಪೆಟ್ಟು ಕೊಟ್ಟೋ ಸರಿಮಾಡಬಹುದಿತ್ತು....ಆದರೇ ಅದು ಹಾಗಾಗಿರಲಿಲ್ಲ,.ಮೊದಲು ಅಪ್ಪನ ಜೇಬಿನಲ್ಲಿ ಕದಿಯುತ್ತಿದ್ದವನು ಬರುಬರುತ್ತಾ ಗೆಳೆಯರು,ನೆಂಟರಿಷ್ಟರು,ನೆರಹೊರೆಯವರೆನ್ನುತ್ತಾ ಎಲ್ಲರ ಮನೆಯಲ್ಲೂ ತನ್ನ ಚಾಳಿಯನ್ನು ಶುರುಮಾಡಿದ್ದ..
           ಅದೆಷ್ಟು ಚಾಲಾಕಿಯಾಗಿದ್ದನೆಂದರೇ ಅವನ ಆ ಕೆಟ್ಟ ಚಾಳಿ ಯಾರಿಗೂ ತಿಳಿಯುತ್ತಿರಲಿಲ್ಲ,.ಅವನ ಬಗೆಗೆ ಎಲ್ಲರಗೂ ಒಳ್ಳೆಯ ಅಭಿಪ್ರಾಯವೇ ಇತ್ತು,.ಯಾರೂ ಏನೂ ಇವನ ಬಗ್ಗೆ ಏನು ಗಮನಿದಿದ್ದರೂ ಆಗಾಗ ಅದೇನೋ ಭಾವನೆ ಅವನ ಆ ಕೆಟ್ಟ ಕದಿಯುವ ಚಾಳಿಯನ್ನು ಪ್ರತಿಭಟಿಸುತ್ತಿತ್ತು,ಒಮ್ಮೊಮ್ಮೆ ಚುಚ್ಚಿ ನಿನ್ನದು ತಪ್ಪು ಎಂದು ಸಾರಿಹೇಳುತ್ತಿತ್ತು ಅವನ "ಆತ್ಮಸಾಕ್ಷಿ" ಅವನೆಲ್ಲಾ  ಚಟುವಟಿಕೆಗಳಿಗೂ ಸಾಕ್ಷಿಯಾಗಿತ್ತು,.ಅದೆಷ್ಟು ಬಾರಿಯಾದರೂ ಇತರರ ಕಣ್ ತಪ್ಪಿಸಿ ತಪ್ಪುಗಳನ್ನು ಮಾಡಬಹುದು,ಆದರೆ ನಮ್ಮೊಳಗೇ ಇರುವ ಆತ್ಮಸಾಕ್ಷಿಯನ್ನು ಮರೆಮಾಡಿ ತಪ್ಪಿಸಿಕೊಳ್ಳಲಾದೀತೆ........??   ಖಂಡಿತಾ ಅಸಾಧ್ಯ.,ನಮ್ಮೊಳಗೇ ಅವಿತು ಕೂತಿರುವ ಆತ್ಮಸಾಕ್ಷಿಯನ್ನು ಮೂಲೆಗೊತ್ತಿ ಅವರವರಿಷ್ಟಕ್ಕೆ ತಪ್ಪು ಒಪ್ಪುಗಳನ್ನು ಮಾಡುತ್ತಾ ಕೂರಲು ಯಾರಿಗೂ ಸಾಧ್ಯ ಆಗುವುದಿಲ್ಲ.,ಇದು ಗಣೇಶನೊಬ್ಬನ ಕಥೆಯಲ್ಲ,ಅವನೊಂದು ಉದಾಹರಣೆಯಷ್ಟೇ....
ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಅಪರಾಧಗಳನ್ನು ಎಚ್ಚರಿಸಲು ಅಪರಾಧಿ ಪ್ರಜ್ಞೆ ಕಾಡಿಯೇ ಕಾಡುತ್ತದೆ,. ನಮ್ಮ ನಡವಳಿಕೆಯನ್ನು ಬದಲಿಸಿಕೊಂಡು,ಸಕಾರಾತ್ಮಕವಾಗಿ ಜೀವನ ನೆಡೆಸಲು ಎಲ್ಲರಿಗೂ ಸಾಧ್ಯವಾಗುವಂತೆ ನಮ್ಮೊಳಗೇ ಶಕ್ತಿಗಳಿವೆ,ಅದನ್ನುಕಂಡುಕೊಳ್ಳಬೇಕಷ್ಟೆ......!!
              ನೀವು ರಸ್ತೆಯ ಮೂಲೆಯಲ್ಲಿ ನೆಡೆದು ಹೋಗುತ್ತಿರುತ್ತೀರಿ.,ಅಚಾನಕ್ಕಾಗಿ ಅಪಘಾತವನ್ನು ಕಣ್ಣಾರೆ ನೋಡುತ್ತೀರಿ,ಆ ಆಘಾತವನ್ನು ಮಾಡಿದವ ನಿಮ್ಮ ಪರಮಾಪ್ತ ಗೆಳೆಯನೇ ಆಗಿರುತ್ತಾನೆ,ಗ್ರಹಚಾರಕ್ಕೆ ನೀವೇ ಆ ಅಪಘಾತವನ್ನು ಹತ್ತಿರದಿಂದ ನೋಡಿದವರು.... ಅಂದೇ ಪೋಲೀಸರು ಮನೆಗೆ ಬಂದಿದ್ದಾರೆ ತನಿಖೆಗೆ.....!!ಪೇಚಾಟ ಶುರುವಾಯಿತು ತಕ್ಷಣ,. ಈ ಸನ್ನಿವೇಶ ನಿಮ್ಮನ್ನು ಯಾವ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮಾಡುತ್ತೆ...??ಒಂದು ಕಡೆ ನಿಮ್ಮ ಪರಮಾಪ್ತ ಸ್ನೇಹಿತ,ಇನ್ನೊಂದು ಬದಿಯಲ್ಲಿ ಅನ್ಯಾಯಕ್ಕೊಳಗಾದ ಜೀವ ಆಸ್ಪತ್ರೆಯಲ್ಲಿ ಸಾವು ಬದುಕಿನ ಜೊತೆ ಹೋರಾಡುತ್ತಿದೆ,. ಒಂದು ಸತ್ಯ-ಒಂದು ಸುಳ್ಳು              ಅಬ್ಬಬ್ಬಾ...!!ಈ ಘೋಜಲಾಮಯ ಸನ್ನಿವೇಶದಲ್ಲಿ ನಿಮ್ಮ ಆಯ್ಕೆ ಸತ್ಯದ ಕಡೆಯಾದರೇ ನಿಮ್ಮ ಸ್ನೇಹಿತ ದೂರವಾದ್ರೂ(ಆದರೂ ಆಗ್ಬೋದು,ನಿಶ್ಚಯವಾಗಿಯಲ್ಲ) ನಿಮಗೆ ಸಮಾಧಾನ ಸಿಗುತ್ತದೆ,ಅದೇ ಒಂದು ಸುಳ್ಳು ಜೀವನದ ಕೊನೆಯ ತನಕ ಕಾಡುತ್ತದೆ.... ಹೀಗೆ ಜೀವನದಲ್ಲಿ ನಮ್ಮ ಪ್ರತೀ ಆಯ್ಕೆ,ನಮ್ಮ ಪ್ರತೀ ನಿರ್ಧಾರ,ಪ್ರತೀ ನಡವಳಿಕೆಗಳು..... ನಮ್ಮ ಮೇಲೇ ನಿಂತಿದೆ.,ಎಲ್ಲರಿಗೂ ಮೆಚ್ಚುವಂತೆ ಬದುಕು ಸಾಗಿಸುವುದು ತುಂಬಾ ಕಷ್ಟ ..ಆದರೆ ನಮ್ಮ ಆತ್ಮ ಮೆಚ್ಚುವ ರೀತಿ ಬದುಕು ಸಾಗಿಸುವುದು ಅತಿ ಉತ್ತಮ....ಅದರಲ್ಲಿ ನಿಮ್ಮದಿಯೂ ಇರುತ್ತದೆ ಹಾಗೂ ಅದು ನಮಗೆ ಉತ್ತಮ ಹಾದಿಯಲ್ಲಿ ನೆಡೆಯುವಂತೆ ಮಾಡುತ್ತದೆ....So
           "Be the path of your soul or conscience "...