Thursday, 19 November 2015

                                ಅವನೊಮ್ಮೆ ಹುಟ್ಟಿ ಬಂದಿದ್ದರೇ...!!

           
         
            ಆತ ಪರಮ ಸುಂದರನಂತೆ,ನಮ್ಮ ಉಸಿರು ಅಥವಾ ಪ್ರಾಣಾತ್ಮ ಅವನೇ ಆಗಿದ್ದಾನಂತೆ,ಸ್ತ್ರೀ ಲೋಲನಂತೆ ಆ ದೇವೋತ್ತಮ..ಆತ ನಮ್ಮೆಲ್ಲರಲ್ಲೂ ಬೆರೆತು ಹೋಗಿದ್ದಾನಂತೆ ಅವನನ್ನು ನಾವೇ ಕಂಡುಕೊಳ್ಳಬೇಕಂತೆ..!ಆತನೇ ಪ್ರತೀ ಜೀವಿಯ ಪರಮ ಗುರಿಯಂತೆ..ಅವನ ಭಕ್ತರಿಗೆ ಸೋಲೇ ಇಲ್ಲವಂತೆ ಹಾಗೆ ಅವನನ್ನರಿಯುವುದೂ ಅತೀ ಕಷ್ಟವಂತೆ.. ಅಷ್ಟೇ ಅಲ್ಲ ಬೃಂದಾವನದ ಗೋಪಿಯರು ಸಂಪೂರ್ಣವಾಗಿ ಇವನಿಗೆ ಶರಣಾಗಿದ್ದರಂತೆ,ಇವನ ಒಂದು ನೋಟ,ಮಾತು,ಪ್ರೀತಿಗಾಗಿ ನಿದ್ರಾಹಾರವಿಲ್ಲದೆ ಹಪಹಪಿಸುತ್ತಿದ್ದರಂತೆ.. ಅದೆಲ್ಲಾ ಜೀವಿಗಳ ಪರಮ ಪ್ರಭು "ಕೃಷ್ಣ " ನಂತೆ.... ಇನ್ನೂ ಏನೇನೋ....!!
               ಅದೆಷ್ಟೋ ಗೋಪಿಯರು ಕೃಷ್ಣನಿಗಾಗಿ ತಮ್ಮದೆಲ್ಲವನ್ನೂ ಧಾರೆ ಎರೆದು ಅವನಿಗಾಗಿ ವಿರಹ ತಾಳಿದ್ದರೆಂದರೇ ಅವನೆಷ್ಟು ಸುಂದರನಿದ್ದಿರಬಹುದು? ಸೋದರಮಾವ ಕಂಸನನ್ನು ಸದೆಬಡಿಯಲು ಮಥುರೆಗೆ ಹೋದಾಗ ಕುಬ್ಜೆಯಿಂದ ಕೇವಲ ಶ್ರೀಗಂಧವನ್ನು ಪಡೆದು,ಆಕೆಗೆ  ಅತಿಷಯವಾದ ಅಂದವನ್ನು ಕೊಟ್ಟಿದ್ದನೆಂದರೆ ಆತನೆಷ್ಟು ಕರುನಾಳುವಾಗಿರಬಹುದು?
Hmmm ಕೇವಲ ಅವನ ಹೆಸರನ್ನು ಜಪಿಸಿದರೆ ಸಾಕು ಮಹಾ ಪಾತಕಗಳೇ ನಾಶವಾಗುತ್ತೆ ಎಂದರೆ ಅವನ ನಾಮವೆಷ್ಟು ಪವಿತ್ರವಾಗಿರಬಹುದು..?ಮಹಾನ್ ರಾಕ್ಷಸರನ್ನೇ ಸಂಹರಿಸಿ ಮೆರೆದಿದ್ದನೆಂದರೇ ಆತನೆಷ್ಟು ಶಕ್ತಿಶಾಲಿ?ನಮ್ಮಂತಹ ಎಷ್ಟೋ ಜೀವಿಗಳ ವಿಶಿಷ್ಟ ಸೃಷ್ಟಿಯ ಮೂಲವೇ ಇವನು ಎಂದರೆ ನಿಜವಾಗಿ ಆಶ್ಚರ್ಯ ವೇ ಸರಿ,.ಈತನೆಷ್ಟು ಕ್ರಿಯಾಶೀಲನಾಗಿದ್ದಿರಬಹುದು? ?
        ಇದನ್ನೆಲ್ಲಾ ಕೇಳುತ್ತಿದ್ದರೆ ಅಥವಾ ಅವನ ಬಗೆಗೆ ಓದುತ್ತಿದ್ದಾಗಲೆಲ್ಲಾ ಅನೇಕ ಸಲ ಅನ್ನಿಸಿದ್ದಂತೂ ನಿಜ ಕೃಷ್ಣ ಮತ್ತೆ ಅವತರಿಸಬಹುದಿತ್ತಲ್ವಾ ಅಂತ....! ಈಗ ನೆಡೆಯುತ್ತಿರೋ ಘಟನೆಗಳೂ ಸಹ ನನ್ನ ಚಿಂತನೆಗೊಂದು ಕಾರಣ, ಸತ್ಯವಂತರಿಗಿದು ಕಾಲವಲ್ಲಯ್ಯಾ ಎಂಬಂತೆ ತನ್ನ ಸ್ವಾರ್ಥ ಸಾಧನೆಗೆ ಇತರರನ್ನು ಬಳಸಿಕೊಂಡು ಇತರರ ಕಾಲೆಳೆದು ಬದುಕುವ ಕಾಲವಿದು.. ನ್ಯಾಯ,ಸತ್ಯ,ಪ್ರಾಮಾಣಿಕತೆಯನ್ನು ಕಾಲಿನ ಕಸವಾಗಿಸಿ ಬದುಕು ಸಾಗಿಸುವವನಿಗಿಂದು ಕಾಲ,ತನ್ನದೆಲ್ಲವನ್ನೂ ಪರಮಾತ್ಮನಿಗೆ ಅರ್ಪಿಸಿ ತನ್ನಷ್ಟಕ್ಕೆ ತಾನು ಬದುಕು ಸಾಗಿಸುವವನಿಗೆ ಕಣ್ಣೀರು,ನೋವು,ನಿಂದೆ ಕಟ್ಟಿಟ್ಟ ಬುತ್ತಿ.. ಇವೆಲ್ಲಾ ಕ್ರೂರತನದ ಅಟ್ಟಹಾಸ ನಿಲ್ಲುವುದೆಂದು?ಪ್ರತಿಯೊಬ್ಬರಲ್ಲೂ ಉತ್ತಮತೆ ಮೂಡುವುದ್ಯಾವಾಗ??
              ಮತ್ತೆ ಅದೇ ನಿರೀಕ್ಷೆ ,ಅವನ ಕೊಳಲ ನಾದಕ್ಕೆ ನಮ್ಮೆಲ್ಲರನ್ನೂ ಸೆರೆಹಿಡಿದಿದ್ದರೇ,...!! ಒಮ್ಮೆ  ನಮ್ಮೆಲ್ಲರ ಹೃದಯ ಸಿಂಹಾಸನದಲ್ಲಿ ಕೂತ ಅವನೊಮ್ಮೆ ಹೊರ ಬಂದಿದ್ದರೆ ಎಲ್ಲಾದಕ್ಕೂ ತಿಲಾಂಜಲಿ ಇಡಬಹುದಿತ್ತೋ ಏನೋ ಅಂತ....

Friday, 6 November 2015

                                                    Dreams V/S Reality....                                    
                       ಅದೆಷ್ಟೋ ವರ್ಷಗಳೇ ಕಳೆದು ಹೋಗಿವೆ.. ಒಂಟಿತನ ಈ ಜೀವಕ್ಕೆ permanent ಅನ್ಸಿಬಿಟ್ಟಿದೆ .. ಸಣ್ಣ ಪುಟ್ಟದ್ದಕ್ಕೂ ಕಣ್ಣೀರಿಡುವ ಹುಡುಗಿ ಈಗ practical life ಗೆ ಕಾಲಿರಿಸಿ ಬಹಳಾ ಕಾಲವಾಗಿತ್ತು.. ಎಲ್ಲಾ ನಿನ್ನ ಕೃಪೆ ಶರತ್ ಎಂದು ಹಣೆಗೆ ಬೊಟ್ಟಿಡುತ್ತಾ ಅವನ ನೆನಪು ತಂದುಕೊಂಡಳು ಸಂಧ್ಯಾ.... ಎಷ್ಟೆಲ್ಲಾ ನೋವು ಕೊಟ್ಟು ಬಿಟ್ಟಿದ್ದ ತನಗಾತ,. ಅಮ್ಮನಷ್ಟೇ ಇಷ್ಟ ಪಡುತ್ತಿದ್ದೆ ಅವನನ್ನು ಕಣ್ಣೀರು ಉಕ್ಕಳಿಸಿದರೂ ತಡೆದು ನಿಲ್ಲಿಸಿದ್ದಳು ಸಂಧ್ಯಾ.. ಪ್ರೀತಿಗೆ ಅರ್ಥ ಗೊತ್ತಿಲ್ಲದ ಒಂದು ಕಲ್ಲಿಗೇಕೆ ಅಳಲಿ? ?ತಿರಸ್ಕಾರದಿಂದ ಗಟ್ಟಿಯಾದರೂ ಮತ್ತದೇ  ನೆನಪು ಹಿಂಡಿ ಹಿಪ್ಪೆ ಮಾಡಿತ್ತು...                                                  
                        ಇವನ ರೀತಿಯೇ ಅಂದು ನಾನು ಕೂಡ practical ಆಗಿ think ಮಾಡಿದ್ದೇ ಆಗಿದ್ದರೆ ಈ ನೋವು ಇರುತ್ತಿರಲಿಲ್ಲವೇನೋ..!! ಸಂಬಂಧಗಳಿಗೆ,ಪ್ರೀತಿಗೆ ಬೆಲೆ ಕೊಡದೇ ನಾನು ಕೂಡ ಸ್ವಾರ್ಥ ಸಾಧಿಸಿದ್ದರೆ ಈ ಪರಿಸ್ಥಿತಿ ಇರುತ್ತಿರಲಿಲ್ಲ ಅನ್ಸುತ್ತೆ..  ಇದ್ದಕ್ಕಿದ್ದಂತೆ ಬದಲಾಗಿ ಹೋಗಿದ್ದ ಶರತ್.. !!                              

                'Be practical yar,why you getting soo emotional' ಸಂಧ್ಯಾ..??let it be.. ನನ್ನ ಆಸೆ ಬಿಟ್ಬಿಡು,ನಿನ್ನ lyf ಬಗ್ಗೆ ಗಮನ ಕೊಡು,.ನನಗೆ ನನ್ನ business ಮುಖ್ಯ..ಅದನ್ನು improve ಮಾಡ್ಬೇಕು,ಅದಾದ್ಮೇಲೆ ಬೇರೆ ಯೋಚ್ನೇ..ಹ್ಞಾ..ಆ ಬೇರೆ ಯೋಚನೆ ನೀನೆ ಆಗಿರ್ತೀಯ ಅಂತ ಅನ್ಕೋಬೇಡ,ನಿಮ್ಮನೇಲಿ ಯಾರನ್ನು ತೋರುಸ್ತಾರೋ ಅವರನನ್ನೇ ಮದುವೆ ಆಗ್ಬಿಡು..ಏನೋ ಹುಡುಗು ಬುದ್ಧಿ ಪ್ರೀತ್ಸಿದ್ದೆ......ಈಗ ಊಹ್ಞು  ಆಗದ ಮಾತು..?? ವ್ಯಂಗ್ಯವಾಗಿಯೇ ಮಾತು ಮುಗಿಸಿದ್ದ ಶರತ್. ಅಂದು ನಮ್ಮಿಬ್ಬರ  ಬದುಕು ಎನ್ನುತ್ತಿದ್ದ ಶರತ್ ಆ ಬದುಕನ್ನೇ ಇಬ್ಬಾಗವಾಗಿಸಿದ್ದ,.ಜೊತೆ ಬಾದುಕುವ ಕನಸನ್ನು ಹೊತ್ತಿದ್ದ ಕನಸನ್ನು ನುಚ್ಚು ನೂರಾಗಿಸಿದ್ದ.. ಕಾರಣವಿಲ್ಲದೇ ಪ್ರೀತಿಯನ್ನು ಕೊಂದಿದ್ದ..ಓದು ಮುಗಿದ ನಂತರ ಹಳ್ಳಿ ತೊರೆದ ಮೇಲೆ ಎಲ್ಲವನ್ನೂ ಮರೆತಿದ್ದ,. .  
           ಆ ಮುಖದಲ್ಲಿ 'ನಾನು' ಅನ್ನೋ ಸ್ವಾರ್ಥವನ್ನು ಬಿಟ್ಟರೆ ಪ್ರೀತಿ, ಕರುಣೆ,ಪ್ರಾಮಾಣಿಕತೆ ಅಕ್ಷರಶಃ ಶೂನ್ಯವಾಗಿತ್ತು....!!ಆತನನ್ನು    ಪ್ರೀತಿಸಿದ್ದ ತಪ್ಪಿಗೆ ದೊಡ್ಡ ಪಾಠವನ್ನು ಕಲಿತಾಗಿತ್ತು....     ಈಗಿದ್ದನ್ನೆಲ್ಲಾ ನೆನಪಿಸಿ ಏನಾಗುವುದಿದೆ Dn't get tooo emotional ಸಂಧ್ಯಾ,.let it be ತನಗೆ ತಾನೆ ಹೇಳಿಕೊಂಡಳು.,ಒಂದು ಕಾಲದಲ್ಲಿ ಶರತ್ ಹೇಳಿದ್ದ....!! ಜೀವನದಲ್ಲಿ ನಮ್ಮ ಜೊತೆ ಸ್ವಲ್ಪ ಕಾಲ ಜೊತೆ ಇದ್ದ ಪ್ರತಿಯೊಬ್ಬರೂ ಏನನ್ನಾದರೂ ನೀಡಿಯೇ ಹೋಗಿರುತ್ತಾರೆ.,ನೋವು ಅಥವಾ ಸಂತೋಷ,.ಯಾವುದೇ ಆಗಿರ್ಲೀ ಅದೊಂದು ಪಾಠ... ಜೀವನದಲ್ಲಿ ಕೆಲ ವ್ಯಕ್ತಿಗಳನ್ನ,ಕೆಲ ಸನ್ನಿವೇಶಗಳನ್ನ,ಕೆಲ ಮಾತುಗಳನ್ನ ಸುಲಭವಾಗಿ ಮರೆಯಲ್ಲಿಕ್ಕಾಗಲ್ಲ...!!  
                 ನೆನಪಿನ ನಾವೆಯಲ್ಲಿ ತೇಲುತ್ತಿದ್ದವಳಿಗೆ ಎಚ್ಚರಿಸಿದ್ದು ಅವಳ office cab ನ ಹಾರನ್ನಿನ ಸದ್ದು.. ನೆನಪುಗಳಿಗೆ ಸಂಜೆ ಸಿಗುವೆನೆಂದು bye bye ಮಾಡಿ ಗಾಡಿ ಹತ್ತಿ ಬದುಕಿನತ್ತ ಹೊರಟಿದ್ದಳು....
                                                                                                     -Akshatha H.S