Monday, 5 October 2015

                           
 "ಆತ್ಮಸಾಕ್ಷಿ "....
                ಅಪ್ಪನ ಜೇಬಿನಿಂದ ಐದು ರೂಪಾಯಿಯ ಒಂದು ನೋಟು ಮತ್ತು ಒಂದೆರಡು ರೂಪಾಯಿಯ ಚಿಲ್ಲರೆಯನ್ನು ಎಗರಿಸಿದ್ದ ಗಣೇಶನೇನೂ ಅಪ್ಪನೆದುರುರಿಗೆ ಸಿಕ್ಕಿಬಿದ್ದಿರಲಿಲ್ಲ..ಆದರೆ ಅದೇ  ಹಣವನ್ನು ಅಂಗಡಿಗೆ ಕೊಟ್ಟು ಬೊಂಬಾಯಿ ಮಿಠಾಯಿ ತಿಂದದ್ದನ್ನು ಈಗಲೂ ನೆನಪಿಸಿಕೊಳ್ಳುತ್ತಾನೆ.,ಅದೇನೋ ಹುಡುಗು ಬುದ್ದಿ  ತಪ್ಪು ಮಾಡಿಬಿಟ್ಟಿದ್ದಾನೆ.
ಈ ವಿಚಾರ ಅಂದೇ ಅವರಪ್ಪನಿಗೋ ಅವರಮ್ಮನಿಗೋ ಗೊತ್ತಾಗಿದ್ದರೇ ನಾಲ್ಕು ಬುದ್ದಿ ಮಾತು ಹೇಳಿಯೋ,ಎರಡು ಪೆಟ್ಟು ಕೊಟ್ಟೋ ಸರಿಮಾಡಬಹುದಿತ್ತು....ಆದರೇ ಅದು ಹಾಗಾಗಿರಲಿಲ್ಲ,.ಮೊದಲು ಅಪ್ಪನ ಜೇಬಿನಲ್ಲಿ ಕದಿಯುತ್ತಿದ್ದವನು ಬರುಬರುತ್ತಾ ಗೆಳೆಯರು,ನೆಂಟರಿಷ್ಟರು,ನೆರಹೊರೆಯವರೆನ್ನುತ್ತಾ ಎಲ್ಲರ ಮನೆಯಲ್ಲೂ ತನ್ನ ಚಾಳಿಯನ್ನು ಶುರುಮಾಡಿದ್ದ..
           ಅದೆಷ್ಟು ಚಾಲಾಕಿಯಾಗಿದ್ದನೆಂದರೇ ಅವನ ಆ ಕೆಟ್ಟ ಚಾಳಿ ಯಾರಿಗೂ ತಿಳಿಯುತ್ತಿರಲಿಲ್ಲ,.ಅವನ ಬಗೆಗೆ ಎಲ್ಲರಗೂ ಒಳ್ಳೆಯ ಅಭಿಪ್ರಾಯವೇ ಇತ್ತು,.ಯಾರೂ ಏನೂ ಇವನ ಬಗ್ಗೆ ಏನು ಗಮನಿದಿದ್ದರೂ ಆಗಾಗ ಅದೇನೋ ಭಾವನೆ ಅವನ ಆ ಕೆಟ್ಟ ಕದಿಯುವ ಚಾಳಿಯನ್ನು ಪ್ರತಿಭಟಿಸುತ್ತಿತ್ತು,ಒಮ್ಮೊಮ್ಮೆ ಚುಚ್ಚಿ ನಿನ್ನದು ತಪ್ಪು ಎಂದು ಸಾರಿಹೇಳುತ್ತಿತ್ತು ಅವನ "ಆತ್ಮಸಾಕ್ಷಿ" ಅವನೆಲ್ಲಾ  ಚಟುವಟಿಕೆಗಳಿಗೂ ಸಾಕ್ಷಿಯಾಗಿತ್ತು,.ಅದೆಷ್ಟು ಬಾರಿಯಾದರೂ ಇತರರ ಕಣ್ ತಪ್ಪಿಸಿ ತಪ್ಪುಗಳನ್ನು ಮಾಡಬಹುದು,ಆದರೆ ನಮ್ಮೊಳಗೇ ಇರುವ ಆತ್ಮಸಾಕ್ಷಿಯನ್ನು ಮರೆಮಾಡಿ ತಪ್ಪಿಸಿಕೊಳ್ಳಲಾದೀತೆ........??   ಖಂಡಿತಾ ಅಸಾಧ್ಯ.,ನಮ್ಮೊಳಗೇ ಅವಿತು ಕೂತಿರುವ ಆತ್ಮಸಾಕ್ಷಿಯನ್ನು ಮೂಲೆಗೊತ್ತಿ ಅವರವರಿಷ್ಟಕ್ಕೆ ತಪ್ಪು ಒಪ್ಪುಗಳನ್ನು ಮಾಡುತ್ತಾ ಕೂರಲು ಯಾರಿಗೂ ಸಾಧ್ಯ ಆಗುವುದಿಲ್ಲ.,ಇದು ಗಣೇಶನೊಬ್ಬನ ಕಥೆಯಲ್ಲ,ಅವನೊಂದು ಉದಾಹರಣೆಯಷ್ಟೇ....
ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಅಪರಾಧಗಳನ್ನು ಎಚ್ಚರಿಸಲು ಅಪರಾಧಿ ಪ್ರಜ್ಞೆ ಕಾಡಿಯೇ ಕಾಡುತ್ತದೆ,. ನಮ್ಮ ನಡವಳಿಕೆಯನ್ನು ಬದಲಿಸಿಕೊಂಡು,ಸಕಾರಾತ್ಮಕವಾಗಿ ಜೀವನ ನೆಡೆಸಲು ಎಲ್ಲರಿಗೂ ಸಾಧ್ಯವಾಗುವಂತೆ ನಮ್ಮೊಳಗೇ ಶಕ್ತಿಗಳಿವೆ,ಅದನ್ನುಕಂಡುಕೊಳ್ಳಬೇಕಷ್ಟೆ......!!
              ನೀವು ರಸ್ತೆಯ ಮೂಲೆಯಲ್ಲಿ ನೆಡೆದು ಹೋಗುತ್ತಿರುತ್ತೀರಿ.,ಅಚಾನಕ್ಕಾಗಿ ಅಪಘಾತವನ್ನು ಕಣ್ಣಾರೆ ನೋಡುತ್ತೀರಿ,ಆ ಆಘಾತವನ್ನು ಮಾಡಿದವ ನಿಮ್ಮ ಪರಮಾಪ್ತ ಗೆಳೆಯನೇ ಆಗಿರುತ್ತಾನೆ,ಗ್ರಹಚಾರಕ್ಕೆ ನೀವೇ ಆ ಅಪಘಾತವನ್ನು ಹತ್ತಿರದಿಂದ ನೋಡಿದವರು.... ಅಂದೇ ಪೋಲೀಸರು ಮನೆಗೆ ಬಂದಿದ್ದಾರೆ ತನಿಖೆಗೆ.....!!ಪೇಚಾಟ ಶುರುವಾಯಿತು ತಕ್ಷಣ,. ಈ ಸನ್ನಿವೇಶ ನಿಮ್ಮನ್ನು ಯಾವ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮಾಡುತ್ತೆ...??ಒಂದು ಕಡೆ ನಿಮ್ಮ ಪರಮಾಪ್ತ ಸ್ನೇಹಿತ,ಇನ್ನೊಂದು ಬದಿಯಲ್ಲಿ ಅನ್ಯಾಯಕ್ಕೊಳಗಾದ ಜೀವ ಆಸ್ಪತ್ರೆಯಲ್ಲಿ ಸಾವು ಬದುಕಿನ ಜೊತೆ ಹೋರಾಡುತ್ತಿದೆ,. ಒಂದು ಸತ್ಯ-ಒಂದು ಸುಳ್ಳು              ಅಬ್ಬಬ್ಬಾ...!!ಈ ಘೋಜಲಾಮಯ ಸನ್ನಿವೇಶದಲ್ಲಿ ನಿಮ್ಮ ಆಯ್ಕೆ ಸತ್ಯದ ಕಡೆಯಾದರೇ ನಿಮ್ಮ ಸ್ನೇಹಿತ ದೂರವಾದ್ರೂ(ಆದರೂ ಆಗ್ಬೋದು,ನಿಶ್ಚಯವಾಗಿಯಲ್ಲ) ನಿಮಗೆ ಸಮಾಧಾನ ಸಿಗುತ್ತದೆ,ಅದೇ ಒಂದು ಸುಳ್ಳು ಜೀವನದ ಕೊನೆಯ ತನಕ ಕಾಡುತ್ತದೆ.... ಹೀಗೆ ಜೀವನದಲ್ಲಿ ನಮ್ಮ ಪ್ರತೀ ಆಯ್ಕೆ,ನಮ್ಮ ಪ್ರತೀ ನಿರ್ಧಾರ,ಪ್ರತೀ ನಡವಳಿಕೆಗಳು..... ನಮ್ಮ ಮೇಲೇ ನಿಂತಿದೆ.,ಎಲ್ಲರಿಗೂ ಮೆಚ್ಚುವಂತೆ ಬದುಕು ಸಾಗಿಸುವುದು ತುಂಬಾ ಕಷ್ಟ ..ಆದರೆ ನಮ್ಮ ಆತ್ಮ ಮೆಚ್ಚುವ ರೀತಿ ಬದುಕು ಸಾಗಿಸುವುದು ಅತಿ ಉತ್ತಮ....ಅದರಲ್ಲಿ ನಿಮ್ಮದಿಯೂ ಇರುತ್ತದೆ ಹಾಗೂ ಅದು ನಮಗೆ ಉತ್ತಮ ಹಾದಿಯಲ್ಲಿ ನೆಡೆಯುವಂತೆ ಮಾಡುತ್ತದೆ....So
           "Be the path of your soul or conscience "...

                                ಆಯ್ಕೆ......


        ಅದೆಷ್ಟೋ ಬಯಕೆಗಳು,ಅದೆಷ್ಟೋ ಕನಸುಗಳನ್ನು      ಈಡೇರಿಸಿಕೊಳ್ಳುವ ಕಾತರತೆ....  ಅವು ಈಡೇರದೇ ಇರುವಂಥಾದ್ದೇನಲ್ಲ...... ಆದ್ರೂ ಜವಾಬ್ದಾರಿ ಅದನ್ನು ಈಡೇರುವಂತೆ ಮಾಡುತ್ತಾ ಅನ್ನೊ confusion ..!!
                   ಜೀವನ ಅಂದ್ರೆ ಹಾಗೆ ಅಲ್ವಾ ಅದೆಷ್ಟೋ ಆಸೆಗಳು,ಕನಸುಗಳು ಚಿತ್ತಾರವನ್ನು ಬಿಡಿಸಿರುತ್ತೆ ಮನಸ್ಸಲ್ಲಿ,.
 ಅದೆಲ್ಲವುಗಳಲ್ಲಿ ಕೆಲವಷ್ಟು ಈಡೇರುತ್ವೆ,ಇನ್ನುಕೆಲವು ಸುಂದರ ಕನಸಿನ ಚಿತ್ತಾರನಳಾಗಿಯೇ ಕೂತಿರತ್ತೆ....ಆಯ್ಕೆಗಳನ್ನು ಪಕ್ಕದಲ್ಲಿರಿಸಿಕೊಂಡು ನಿರ್ಧಾರಕ್ಕೋಸ್ಕರ ಅಂಚಿ-ಪಿಂಚಿ ಹಾಕುತ್ತಾ ಕೂರುವ ಕಾಯಕ ಯಾರಿಗೂ ಬೇಡ ಅನ್ನಿ...!!
                 ಒಂದು ಕನಸು,ಒಂದು ಜವಾಭ್ದಾರಿ... ಇವೆರಡು ಏಕ ಮಾತ್ರದಲ್ಲಿ ಈಡೇರ್ಬೇಕು ಅಂದಾಗ ಆಯ್ಕೆ ಮಾಡುವುದು ಕಷ್ಟವೇ...ಆದ್ರೂ ಯಾವುದಾದ್ರೂ ಒಂದು ನಿರ್ಧಾರ ಆಗ್ಲೇ ಬೇಕು, ಕನಸಿನ ಸಮಾದಿಯೋ,ಇಲ್ಲವೇ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳೋದೋ..?? ಇವೆರಡರಲ್ಲಿ ಯಾವುದರ ಕೈ ಬಿಟ್ಟರೂ ಆತ್ಮಸಾಕ್ಷಿಗೆ ನೋವುಂಟು ಮಾಡಿದ ರೀತಿಯೇ....!!
ಕನಸುಗಳ ಕೈ ಹಿಡಿದು ಜವಾಬ್ದಾರಿಯನ್ನು ಕೈ ಹಿಡಿದೆವೆನ್ನಿ ಇದು ' ಸ್ವಾರ್ಥ'ವೆಂದೆನಿಸುತ್ತೆ..!!
           ಕನಸುಗಳನ್ನು ಬದಿಗೊತ್ತಿ ಜವಾಬ್ದಾರಿಯ ಕಡೆ ಕೈ ಚೆಲ್ಲಿದ್ದರೂ ಅದು ನಮ್ಮ ಮನಸ್ಸಿಗೆ,ಮನಸ್ಸಾಕ್ಷಿಗೆ ಮಾಡಿದ ಅಪಮಾನ,ಹಾಗೇ ಆ ನೋವು ಕೊನೆಯ ವರೆಗೂ ಉಳಿದುಬಿಡುತ್ತದೆ.....
ಈ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಧಾರ ತುಂಬಾ ಪ್ರಮುಖವಾದುದು.,ನೋವು ಸಹಜ,.ಆದ್ರೆ ಆ ಜವಾಬ್ದಾರಿ ಮತ್ತು ಕನಸಿನ ನಡುವಿನ ನಮ್ಮ ಆಯ್ಕೆ ಸಾವಿರ ಬಾರಿ ಕೂತು ಯೋಚಿಸಿ ತೆಗೆದುಕೊಂಡ ನಿರ್ಧಾರವಾಗಿರಬೇಕು,. ಇಂತಹದೊಂದು ಗೋಜಲಾಮಯ ಸನ್ನಿವೇಶ ಪ್ರತಿಯೊಬ್ಬರ ಜೀವನದಲ್ಲೂ  ಬರತ್ತೆ.... ಈ ಸಂದರ್ಭದಲ್ಲಿ ನಾವು ಮಾಡುವ ಆಯ್ಕೆ ಸಂಪೂರ್ಣವಾಗಿ ನಮ್ಮನ್ನು ಬದಲಿಸುತ್ತೆ....... :)

                     Different style ನ ಜನ್ರಪ್ಪ,full difficult ಉ..!?


 

                             ಕೆಲಸದ ತಲೆಬಿಸಿಯನ್ನು ಮುಗಿಸಿ ಬಂದ ಜೀವ ಸಮಾಧಾನವೇ ಇಲ್ಲದಂತೆ ನರಳ್ತಿತ್ತು..ಮಾತು ಬೇಡ.  ಕಥೆ ಬೇಡ,ಯಾಕಾದ್ರೂ ಬೇಕಪ್ಪ ಈ Job ಸಹವಾಸ ಅರಾಮಾಗ್ ಮನೆಲಿರಣ ಅನ್ಸಿಬಿಡುತ್ತೆ.. ಅನ್ಸದಷ್ಟೆ, ಹ್ಞೂ.. ಈ ಹಾಳಾದ independency ಅನ್ನೋ ಪದ ಇದ್ಯಲ್ಲ ಅದು ನನ್ ಕೆಲ್ಸಕ್ ರಾಜೀನಾಮೆ ನೀಡಕ್ಕೂ ಬಿಡಲ್ಲ ಅನ್ನತ್ತೆ....
ಅದ್ ಬಿಡಿ ನನ್ ಮನ್ಸು ಈ Tension ಇಂದ free ಆಗ್ಬೇಕಲಾ,ಅದಕ್ಕಾಗಿ ಏನ್ ಮಾಡೋದಂತ ಅಲ್ಲಿಂದಿಲ್ಲಿಗೆ ಪುರ್ಸೊತ್ತಿಲ್ಲದೇ ಓಡಾಡ್ಡೆ,ಅಮ್ಮನಿಗೆ ಫೋನಾಯಿಸಿ ಒಂದಷ್ಟು ಹೊತ್ತು ಹಲಬ್ದೆ..whatsup,Facebook ಅಂತ open ಮಾಡಿದ್ರು ಊಹ್ಞೂ ಸಮಾಧಾನ ಇಲ್ಲ..ಇದು ಆಗದ ಮಾತು ಅನ್ಕೊಂಡು ಸುಮ್ನೆ ನನ್ mobile ಗೆ earphone ಚುಚ್ಚಿ  favorites ಗೆ ಹೋಗಿ ನೆಚ್ಚಿನ melodies ಗಳ್ನ ಕೇಳ್ತಾ,ಗುನುಗುನಿಸುತ್ತಾ ಕುಳ್ತೆ,. ಈಗ್ ಒಂದ್ ತರಹ relief ಆಯ್ತು ನೋಡಿ.. ಅಲ್ಲಿಯ ತನ್ಕ ಇದ್ದ ಕೆಟ್ಟ ಬೇಜಾರು,ಮನಸಿನ ಹೊಯ್ದಾಟ,.ಈಗ ತಕ್ಕ ಮಟ್ಟಿಗೆ ಕಡಿಮೆಯಾಗಿತ್ತು,.
         
             ನನ್ ಕಥೆ ಇಲ್ಲಿಗೆ ಮುಗೀತು ಅನ್ಕೊಳ್ಳಿ,ಯಾಕಂದ್ರೆ ಒಂದು ಫೋನು ಅದ್ರಲ್ಲಿ  Mp3 songs ಇದ್ಬಿಟ್ರೆ ಮುಗ್ದೇ ಹೋಯ್ತು.. ಯಾರ್ ಸುದ್ದಿ ಬೇಡ ಸುಕಾರ್ ಬೇಡ ನಾನೆ ದೊಡ್ಡ ಶ್ರೇಯಾ ಘೋಷಾಲ್ ಅನ್ಕೊಂಡು Songs ಕೇಳ್ತಾ ಹಾಡ್ತಾ ಕೂತ್ಬಿಡೋದು,.

           ನನ್ದೇನ್ Different style ಅಲ್ಲ ಬಿಡಿ,ಯಾಕಂದ್ರೆ  Almost ಜನಕ್ಕೆ Music ಅನ್ನೋದು ಒಂದ್ ತರ Passion ಆಗಿರತ್ತೆ.....ಹಾಗೇನೇ books ಓದ್ತಾರೆ,meditation ಮಾಡ್ತಾರೆ... ಹೀಗೆ ಸುಮಾರಷ್ಟು ಬಗೆ ಇದೆ ಮನ್ಸನ್ನ relaxation ಮಾಡ್ಕೊಳಕ್ಕೆ... ಆದ್ರೆ ನಾನ್ ಹೇಳಕ್ ಹೊರ್ಟಿರೋದು different style ನ ಹೇಗೆ ತಮ್ಮ ಮನ್ಸನ್ನ normal mood ಗೆ ತನ್ಕೊತಾರೆ ಅನ್ನೋದ್ರ ಬಗ..!!

      ''Please ನನ್ disturb ಮಾಡ್ಬೇಡ ಮೊದ್ಲೆ ನನ್ mood ಸರಿ ಇಲ್ಲ,.ಒಂದ್ ಸರಿ ಹೇಳಿದ್ ಅರ್ಥ ಆಗಲ್ವಾ,ಸುಮ್ನೆ ಬೈಸ್ಕೊಬೇಡ".... ಈ dialogue ಎಲ್ಲೋ ಕೇಳ್ದಂಗಿದೆ ಅನ್ಸಲ್ವಾ.? ಕೇಳೇ ಕೇಳಿರ್ತಿರಾ,. ತಮ್ಮ ಹಾಳಾಗಿರೋ ಮನ್ಸನ್ನ ಸರಿ ಮಾಡ್ಕೊಳಕ್ಕೆ ಈ ತರ ಬೇರೆಯವ್ರ mood ನ ಹಾಳ್ ಮಾಡೊ ಜನ different ಅಲ್ವಾ..??
ಇಷ್ಟೇ ಅಲ್ಲ ಎಲ್ಲಾ hurt ಮಾಡಿದ್ಮೇಲೆ  'Sry ನನ್ mood ಸರಿ ಇರ್ಲಿಲ್ಲ so ರೇಗ್ಬಿಟೆ ಅನ್ನೋ ಸಂತಾಪ ಸೂಚನೆ'...!!
     ಇನ್ನೇನ್ ಮಾಡೋದು ಪಾಪ ಮನ್ಸು ಸರಿ ಇಲ್ದೆ ರೇಗ್ಬಿಟ್ರು,. ಇದ್ರಿನ್ದನಾದ್ರು ಅವ್ರ mood ನೆಟ್ಟಗಾಯ್ತಲ್ಲಾ ಅನ್ನೋದೇ ಖುಷಿ,ಸ್ವಲ್ಪ ಸಮಯ ನಮಗವರ ಮಾತು ನೋವಾದ್ರೂ,ನಾವು ಅವರ ಹಾಳಾದ mood ನ ರಿಪೇರಿಗೆ ಕಾರಣಕರ್ಥರಾದೆವಲ್ಲ ಅನ್ನೋ ಹೆಮ್ಮೆ....ಇರೋದ್ರಲ್ಲೆ positive thinking ಮಾಡೋದು ಅಂದ್ರೆ ಇದೇನೇ..

             Anyways ನಾನ್ ಹೇಳ್ದೆ ಅಂತ ನಿಮ್ಮ್ ಬೇಜಾರ್ ಕಳ್ಯಕ್ಕೆ ಇದ್ದ ಬದ್ದವ್ರಿಗೆ hurt ಮಾಡೀರಾ..
ಒಳ್ಳೊಳ್ಳೆ hobbies ನ ರೂಡಿಸ್ಕೊಳ್ಳಿ ದಿನವೆಲ್ಲಾ ಮನ್ಸು ಖುಷಿಯಾಗಿರತ್ತೆ.. ಆದಷ್ಟು ನಗ್-ನಗ್ತಾ ಇರಿ ಒತ್ತಾಯಪೂರ್ವಕನಾದ್ರೂ ಆಗ depression ಇದ್ರೂ ಅಥವಾ ಮನ್ಸು ಹಾಳಾಗಿದ್ರೂ ಸ್ವಲ್ಪಮಟ್ಟಿಗೆ ನಿರಾಳ ಆಗತ್ತೆ..  ಯಾವುದೋ ಬೇಜಾರ್ಗೆ ಯಾರ್ನೋ ಬಲಿಪಶು ಮಾಡೋದು ತಪ್ಪಲ್ವಾ...??so ಒಳ್ಳೊಳ್ಳೆ  hobbies ನ ಬೆಳಸ್ಕೊಂಡು ಇಂಥ depression ಅಥವಾ  ಬೆರೆವ್ರಗೆ hurt ಮಾಡೊ ಎಡವಟ್ಟುಗಳಿಗೆ good bye ಹೇಳಣ........:)